ಏನ ದುಡಿದೆ ನೀನು?

ಏನ ದುಡಿದೆ ನೀನು-ಭಾರಿ
ಅದೇನ ಕಡಿದೆ ನೀನು?
ನೀನು ಬರುವ ಮೊದಲೇ-ಇತ್ತೋ
ಭೂಮಿ ಸೂರ್ಯ ಬಾನು

ಕಣ್ಣು ಬಿಡುವ ಮೊದಲೇ-ಸೂರ್ಯನ
ಹಣತೆಯು ಬೆಳಗಿತ್ತೋ
ಮಣ್ಣಿಗಿಳಿವ ಮೊದಲೇ – ಅಮ್ಮನ
ಎದೆಯಲಿ ಹಾಲಿತ್ತೋ
ಉಸಿರಾಡಲಿ ಎಂದೇ – ಸುತ್ತಾ
ಗಾಳಿ ಬೀಸುತಿತ್ತೋ
ದಾಹ ಕಳೆಯಲೆಂದೇ – ನೀರಿನ
ಧಾರೆಯು ಹರಿದಿತ್ತೋ

ಇದ್ದ ಮಣ್ಣ ಎತ್ತಿ- ಕಟ್ಟಿದೆ
ದೊಡ್ಡ ಸೌಧವನ್ನ
ಬಿದ್ದ ನೀರ ಹರಿಸಿ – ಗಳಿಸಿದೆ
ವಿದ್ಯುತ್ ಬಲವನ್ನ
ಸದ್ದು ಬೆಳಕ ಸೀಳಿ – ತೆರೆದೆಯೊ
ಶಕ್ತಿಯ ಕದವನ್ನ
ನಿನ್ನದು ನಿಂತಿದೆಯೋ – ನೆಮ್ಮಿ
ಮೊದಲೆ ಇದ್ದುದನ್ನ.

ಇದ್ದುದನ್ನೆ ಹಿಡಿದು – ಭಾಗಿಸಿ
ಕೂಡಿ ಗುಣಿಸಿ ಕಳೆದು
ಗೆದ್ದೆ ಹೊಸದ, ನಾನೇ-ಸೃಷ್ಟಿಗೆ
ಪ್ರಭು ಎನಬಹುದೇನು?
ಚುಕ್ಕಿ ಬಾನ ತಡಕಿ – ಅಷ್ಟಕೆ
ಸೊಕ್ಕಿ ಕುಣಿವ ತಮ್ಮ
ಇರಲಾರಳೆ ಹೇಳೋ – ಅವುಗಳ
ಹಡೆದ ಒಬ್ಬ ಅಮ್ಮ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೩೮
Next post ಬೆರಗುಗೊಳಿಸುವುದಿಲ್ಲ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys